‘ದಂಡುಪಾಳ್ಯ ಚಿತ್ರದ ನಿರ್ಮಾಪಕರಿಂದ ಮತ್ತೊಂದು ಚಿತ್ರ ‘ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ
Posted date: 29 Wed, Apr 2015 – 12:41:48 PM

ಈ ಹಿಂದೆ ‘ದಂಡುಪಾಳ್ಯ ಎಂಬ ಯಶಸ್ವಿ ಚಿತ್ರವನ್ನು ನಿರ್ಮಿಸಿದ್ದ ಎಚ್.ಡಿ.ನಾರಾಯಣಬಾಬು ತಮ್ಮ ಆಪಲ್ ಬ್ಲಾಜಮ್ ಸಂಸ್ಥೆ ಮೂಲಕ ‘ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ದಂಡುಪಾಳ್ಯ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ಅವರು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆ.
ಕೋಮಲ್, ಪ್ರಿಯಾಮಣಿ, ರವಿಶಂಕರ್, ಸಾಧುಕೋಕಿಲ, ದೊಡ್ಡಣ್ಣ, ಪೂಜಾಗಾಂಧಿ, ಪ್ರಶಾಂತ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಎರಡು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್‌ಜನ್ಯರ ಸಂಗೀತ ನಿರ್ದೇಶನವಿದೆ. ಶ್ಯಾಮ್‌ಪ್ರಸಾದ್ ಛಾಯಾಗ್ರಹಣ, ರವಿ ಸಂಕಲನ, ತ್ರಿಭುವನ್ ನೃತ್ಯ ನಿರ್ದೇಶನ, ಮಂಜು ಸಾಹಸ ನಿರ್ದೇಶನ ಹಾಗೂ ಮೋಹನ್ ಪಂಡಿತ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed